ಕೃಷಿ ಕ್ಷೇತ್ರದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ತಲೆದೋರಿದೆ. ಕೃಷಿ ಕೆಲಸ ಕಾರ್ಯಗಳಿಗೆ ನುರಿತ ಕೆಲಸಗಾರರು ಇಲ್ಲ. ಕೃಷಿ ಕೆಲಸ ಸಮಯಕ್ಕೆ ಸರಿಯಾಗಿ ಆಗದಿದ್ದರೆ ನಷ್ಟ ಉಂಟಾಗುತ್ತದೆ.
ಕೃಷಿ ಕೂಲಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಮತ್ತು ಕೃಷಿ ಕೆಲಸ ಸಕಾಲಲ್ಲಿ ನಿರ್ವಹಿಸಲು ಯಾಂತ್ರೀಕರಣಕ್ಕೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಸರಕಾರವು ಕೃಷಿ ಇಲಾಖೆಯ ಮೂಲಕ ಕೃಷಿ ಯಾಂತ್ರೀಕರಣ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ
ಈ ಯೋಜನೆಯಲ್ಲಿ ಶೇಕಡ 50ರ ಸಹಾಯಧನದಲ್ಲಿ ಸಾಮಾನ್ಯ ವರ್ಗ ರೈತರಿಗೆ ಹಾಗೂ ಶೇಕಡ 90ರ ಸಹಾಯಧನದಲ್ಲಿ ಪರಿಶಿಷ್ಟ ಜಾತಿ ಪಂಗಡ ರೈತರಿಗೆ ಗರಿಷ್ಠ ಒಂದು ಲಕ್ಷ ಸಹಾಯಧನದ ಮಿತಿಯೊಂದಿಗೆ ಕೃಷಿ ಯಂತ್ರೋಪಕರಣ ನೀಡುವ ಯೋಜನೆಯಾಗಿದೆ.
ಸಣ್ಣ ಟ್ರ್ಯಾಕ್ಟರ್, ಟ್ರ್ಯಾಕ್ಟರ್ ಚಾಲಿತ ಉಪಕರಣಗಳು, ಪವರ್ ಟಿಲ್ಲರ್, ಭತ್ತ ನಾಟಿ ಯಂತ್ರ, ಬೇಲರ್ ಮತ್ತು ಕಂಬೈನ್ಡ್ ಹಾರ್ವೆಸ್ಟರ್, ಅಂತರ ಬೇಸಾಯ ಉಪಕರಣಗಳು, ಕೊಯ್ಲು ಮತ್ತು ಒಕ್ಕಣೆ ಉಪಕರಣಗಳು, ಸಸ್ಯ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣಾ ಉಪಕರಣಗಳು, ಪಂಪುಸೆಟ್ಟುಗಳು ಕೃಷಿ ಯಾಂತ್ರೀಕರಣ ಯೋಜನೆಯಡಿ ದೊರೆಯಲಿದೆ
ಮಾಹಿತಿ : ಸಹಾಯಕ ಕೃಷಿ ನಿರ್ದೇಶಕರು ಕಾರ್ಕಳ ತಾಲೂಕು









