spot_img
Saturday, July 27, 2024
spot_imgspot_img
spot_img
spot_img

ಇಲ್ಲಿದೆ ರೈತರಿಗೆ ಅಮೂಲ್ಯ ತೋಟಗಾರಿಕಾ ಸಲಹೆಗಳು!

  • -ಡಾ. ಶಶಿಕುಮಾರ್ ಎಸ್.

ಕಾಯಿ ಕೊರಕ, ದುಂಡಾಣು ಅಂಗಮಾರಿ ರೋಗ ಹಾಗೂ ಶಿಲೀಂದ್ರ ರೋಗಗಳಿಗೆ ತುತ್ತಾದ ದಾಳಿಂಬೆ ಹಣ್ಣುಗಳನ್ನು ತೋಟಗಳಲ್ಲಿ ಹಾಗೇ ಬಿಡದೇ ಕನಿಷ್ಟ 2-3 ಅಡಿ ಆಳವಾದ ತೆಗ್ಗುಗಳಲ್ಲಿ ಹಾಕಿ ಮಣ್ಣು ಮುಚ್ಚಬೇಕು.

* ಬೇಸಿಗೆಯಲ್ಲಿ ಹಾಗೂ ಮಳೆ ಇಲ್ಲದ ಸಮಯದಲ್ಲಿ ತೆಂಗಿನ ಬೆಳೆಗೆ ಕನಿಷ್ಟ 10 ದಿನಗಳಿಗೊಮ್ಮೆ ನೀರು ಕೊಡುವದರಿಂದ ಉತ್ಪಾದನೆ ಹೆಚ್ಚಿಸಬಹುದಾಗಿದೆ.

* ಪಪಾಯ ಚಿಬ್ಬು ರೋಗದ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿ ಎಲೆಗಳಿಗೆ ಹಾಗೂ ಹಣ್ಣುಗಳಿಗೆ ಸಿಂಪಡಿಸಬೇಕು.

* ಬೇಸಿಗೆಯಲ್ಲಿ ಎಲ್ಲ ಬಹುವಾರ್ಷಿಕ ಬೆಳೆಗಳ ತೋಟಗಳ ಮಣ್ಣಿನಲ್ಲಿಯ ತೇವಾಂಶವನ್ನು ಕಾಪಾಡಲು ಲಭ್ಯವಿರುವ ತ್ಯಾಜ್ಯವಸ್ತುಗಳಿಂದ ಮಣ್ಣಿನ ಮೇಲೆ ಹೊದಿಕೆ ಮಾಡಬೇಕು.

* ಹಣ್ಣಿನ ಬೆಳೆಗಳಲ್ಲಿ (ಮಾವು, ಪೇರಲ, ಕಲ್ಲಂಗಡಿ) ಮಿಥೈಲ್ ಯುಜಿನಾಲ್ ಬಲೆಗಳನ್ನು ಹಾಗೂ ತರಕಾರಿ (ಕುಂಬಳ, ಸೌತೆ, ಹಾಗಲ, ಹೀರೆ ಇತ್ಯಾದಿ)ಗಳಲ್ಲಿ ಹಣ್ಣು ನೊಣಗಳಿಂದ ಆಗುವ ಹಾನಿಯನ್ನು ತಡೆಗಟ್ಟಲು ಪ್ರತಿ ಎಕರೆಗೆ ಐದರಂತೆ ಬಲೆಗಳನ್ನು ಹಾಕಬೇಕು. ಇಲ್ಲವೇ Neemazol or acephate   ಸಿಂಪಡಿಸಬೇಕು.

* ನೀರಿನ ಸೌಲಭ್ಯವಿರುವ ಸಣ್ಣ ಹಿಡುವಳಿದಾರರು ಬೇಸಿಗೆಯಲ್ಲಿ ತರಕಾರಿ ಬೆಳೆಯುವದು ಸೂಕ್ತ. ಒಂದೇ ಸಲಕ್ಕೆ ಪೂರ್ತಿ ಕ್ಷೇತ್ರದಲ್ಲಿ ಒಂದೇ ತರಹದ ತರಕಾರಿ ಬೆಳೆಯುವದಕ್ಕಿಂತ ಕ್ಷೇತ್ರವನ್ನು ವಿಭಜಿಸಿ ವಿವಿಧ ತರಕಾರಿಗಳನ್ನು ಬೆಳೆೆಯುವದು ಹೆಚ್ಚು ಲಾಭಕರ.

* ಎಲೆ ಬಳ್ಳಿ ಹಾಗೂ ಮೆಣಸಿನ ಬಳ್ಳಿಗಳಿಗೆ ಆಸರೆ ಸಸ್ಯವಾಗಿ ಬೆಳೆಯುತ್ತಿದ್ದ ಎರಿಥ್ರಿನಾ ಇಂಡಿಕಾ ಎಂಬ ಹಾಲವಾಣದ ಬದಲು ಇತ್ತೀಚೆಗೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಗುರುತಿಸಿದ ಗಂಟು ಹುಳುವಿನ ನಿರೋದಕ ಹಾಲವಾಣ “ಎರಿಥ್ರಿನಾ ಸಬ್‌ವುಂಬ್ರನ್ಸ್’’ ಎಂಬ ಜಾತಿಯ ಹಾಲವಾಣವನ್ನು ಬೆಳೆಯುವದು ಸೂಕ್ತ.

* ಬೇಸಿಗೆಯಲ್ಲಿ ಮಣ್ಣಿನ ಮಾದರಿ ತೆಗೆದು, ಮಣ್ಣು ಪರೀಕ್ಷೆ ಮಾಡಿಸಿ ಸೂಕ್ತವಾದ ಮಣ್ಣು ಫಲವತ್ತತೆ ನಿರ್ವಹಣಾ ಕ್ರಮಗಳನ್ನು ಅಳವಡಿಸಬೇಕು.

* ಮೇ-ಜೂನ್ ತಿಂಗಳುಗಳು ಹಣ್ಣಿನ ಗಿಡಗಳನ್ನು ನಾಟಿ ಮಾಡಲು ಸೂಕ್ತ ಸಮಯ. ಅದಕ್ಕೆ ಪೂರ್ವ ಬೇಸಿಗೆಯಲ್ಲಿಯೇ ಆಯಾ ಬೆಳೆಗಳಿಗೆ ಸಿಫಾರಸು ಮಾಡಿದ ಅಂತರದಲ್ಲಿ ತೆಗ್ಗುಗಳನ್ನು ಅಗೆದು ಬಿಡಬೇಕು. ತೆಗ್ಗುಗಳಲ್ಲಿ ಸಾವಯವ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರ ತುಂಬಿ, ಅನಂತರ ನಾಟಿ ಮಾಡಬೇಕು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group