ಒಂದು ದುರಂತ ಎಂದರೆ ಈ ಹಲಸು ವ್ಯಾಪಾರಿಗಳು ರಸ್ತೆ ಪಕ್ಕದ ಕಾಡಿನ ಮರದ ಹಲಸಿನ ಕಾಯಿಯನ್ನು ಕದ್ದು ಕೊಂಡೊಯ್ತಾರೆ. ನಮ್ಮ ಮಲೆನಾಡಿನಲ್ಲಿ ಹಲಸನ್ನ ಯಾರೂ ಅಧಿಕೃತ ವಾಗಿ ಕೃಷಿ ಮಾಡಿಲ್ಲ. ಈ ಎಲ್ಲಾ ಹಲಸುಗಳೂ ನಿಸರ್ಗದ ಕೊಡುಗೆಗಳು. ಈ ಹಳೆಯ ಹಲಸಿನ ಮರಕ್ಕೆ ನ್ಯಾಯವಾಗಿ ಅರಣ್ಯ ಇಲಾಖೆ ಯಜಮಾನರು. ಅವರಿಗೆ ಇದು ಕಾಡು ಉತ್ಪನ್ನ , ಈ ಅಕ್ರಮ ಹಲಸಿನ ರವಾನೆಯನ್ನು ಪ್ರಶ್ನಿಸಬೇಕೆಂಬುದೇ ಅರಿವಿಲ.!! ಒಂದು ಹತ್ತು ಟ್ರಿಪ್ ಹಲಸಿನ ಕಾಯಿಯನ್ನು ಇವರು ವ್ಯಾಪಾರ ಮಾಡಿದರೆ ಇವರಿಗೆ ಮೂರು ಲಕ್ಷ ರೂಪಾಯಿ ಲಾಭ ಸಿಗುತ್ತದೆ. ಬಹಳಷ್ಟು ಮಲೆನಾಡಿಗರಿಗೆ ಹಲಸಿನ ಕಾಯಿ ಮಾರಾಟ ಮಾಡಿದರೆ ಮಂಗನ ಕಾಟ ಕಡಿಮೆಯಾಗುತ್ತದೆ ಎಂಬ ತಪ್ಪು ತಿಳಿವಳಿಕೆ. ದಯವಿಟ್ಟು ಗಮನಿಸಿ ಚಿಂತನೆ ನೆಡೆಸಿ ಬಂಧುಗಳೇ..ಹಲಸಿನ ಕಾಯಿ ಕೇವಲ ಮಂಗನಿಗೆ ಮಾತ್ರ ಆಹಾರವಲ್ಲ.! ಹಲಸಿನ ಹಣ್ಣು ಮಂಗ,ಅಳಿಲು, ಕೆಂಜಳಿಲು, ಜಾನುವಾರು, ಹಂದಿ, ಕಾಡು ಕೋಣ, ನರಿ ಸೇರಿದಂತೆ ಅಸಂಖ್ಯಾತ ನಿಸರ್ಗ ಜೀವಿಗಳ ಆಹಾರ. ಈ ಬಾರಿ ಮಲೆನಾಡಿನಲ್ಲಿ ಅತ್ಯಧಿಕವಾಗಿ ಹಲಸು ಫಸಲು ಬಂದಿದೆ.
ಹೌದು ಸ್ವಾಮಿ, ಮನೆಯ ಸಮೀಪದಲ್ಲಿ ತೋಟದ ತಲೆಯಲ್ಲಿ ಹಲಸಿನ ಮರ ಇದ್ದರೆ ಅದಕ್ಕೆ ಮಂಗ ಬರುತ್ತದೆ.… ಅಂತ ಶತಾಯಗತಾಯ ಹಲಸಿನ ಕಾಯಿ ಉದುರಿಸಿ ಹೀಗಿನ ಬಡಾ ದೋಸ್ತರಿಗೆ ಮಾರುತ್ತಾರೆ. ಹಲಸಿನ ಕಾಯಿ ಸುಮಾರು ಜೂನ್ ತಿಂಗಳ ಕೊನೆಯ ತನಕವೂ ಮಂಗನಿಗೆ ಆಹಾರ ನೀಡುತ್ತದೆ. ಹಲಸಿನ ಹಣ್ಣು ಇದ್ದರೂ ಮಂಗ ಸ್ವಲ್ಪ ಮಟ್ಟಿಗೆ ಅಡಿಕೆ ರಸ ತುಂಬುವ ಸಂಧರ್ಭದಲ್ಲಿ ಲೂಟಿ ಮಾಡುತ್ತದೆ. ಆದರೆ ಹೀಗೆ ಲೂಟಿ ಮಾಡುವ ಪ್ರಮಾಣ ಕಡಿಮೆ. ಒಂದು ವೇಳೆ ಪೂರ್ಣ ಹಲಸಿನ ಕಾಯಿ ಕಿತ್ತು ಮಾರಿದರೆ ಮಂಗ ಅಡಿಕೆ ತೋಟದಲ್ಲೇ ಲಂಗರು ಹೂಡುತ್ತವೆ.ತ್ವಾಟದಲ್ಲಿ ಒಂದು ಅಡಿಕೆನೂ ಉಳಿಸದೇ ತರಿದು ಹಾಕುತ್ತವೆ. ಮಂಗ ತುಡುಗು ಜಾತಿಯವು.ಜಗತ್ತಿನಲ್ಲಿ ಮಂಗ ಮತ್ತು ಮನುಷ್ಯ ಹೊಟ್ಟೆ ತುಂಬಿದ ಮೇಲೂ ಕೀಟಲೆ ಮಾಡುವ ನಿಸರ್ಗ ಸಹಜತೆಯನ್ನು ಹಾಳು ಮಾಡುವ ಜೀವಿಗಳು. ಆನೆ ಕಾಡು ಕೋಣಗಳೂ ತಮಗೆ ಬೇಕಾದ ಆಹಾರ ಹುಡುಕಿಕೊಂಡು ಹೋಗುವಾಗ ಕೃಷಿ ಜಮೀನು ಹಾಳು ಮಾಡುತ್ತವೆ. ಆದರೆ ಮಂಗ ಮತ್ತು ಮನುಷ್ಯ ಈ ಪ್ರಾಣಿಗಳಂತಲ್ಲ!! ಅತ್ಯಂತ ದುಷ್ಟ ಜೀವಿಗಳು. ಆಹಾರದಾಚೆ ಯೋಚನೆ ಮಾಡುವಂತವುಗಳು.

ಇರಲಿ.ಮಲೆನಾಡಿನ ಅಡಿಕೆ ಬೆಳೆಗಾರ ಬಂಧುಗಳೇ ಜೂನ್ ಜುಲೈ ಆಗಷ್ಟ್ ತಿಂಗಳು ಅಡಿಕೆ ಬೆಳೆಗೆ ಅತ್ಯಂತ ಸವಾಲಿನ ದಿನಗಳು. ಎಲೆಚುಕ್ಕಿ ಅಡಿಕೆ ಕೊಳೆಯ ಜೊತೆಯಲ್ಲಿ ಮಲೆನಾಡಿನ ಅಡಿಕೆ ರಸ ತುಂಬುವ “ರಸಘಳಿಗೆ” ಮಂಗಗಳು ಈ ಅಮಲುಕಾರಿ ಅಡಿಕೆ ರಸಕ್ಕೆ ಎಳೆ ಅಡಿಕೆ ಕೊನೆಯ ಮೇಲೆ ದಾಳಿ ಮಾಡುತ್ತವೆ . ಈ ಸಂಧರ್ಭದಲ್ಲಿ ಮಾತ್ರ ಅಡಿಕೆ ಬೆಳೆಗೆ ಮಂಗಗಳು ದಾಳಿ ಮಾಡುತ್ತವೆ. ಇದೊಂದು ಸಂಧರ್ಭದಲ್ಲಿ ಮಂಗಗಳ ಉಪಟಳ ಕಡಿಮೆ ಯಾಗಲು ನಿಸರ್ಗದಲ್ಲಿ ಹಲಸಿನ ಹಣ್ಣು ಇದ್ದರೆ ಖಂಡಿತವಾಗಿಯೂ ಮಂಗ ಅಡಿಕೆ ಮೇಲಿನ ದಾಳಿ ಮಾಡಿ ಹಾಳುಗೆಡವುದನ್ನ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ಆದ್ದರಿಂದ ದಯವಿಟ್ಟು ನಿಮ್ಮ ಮನೆ ತೋಟದ ಸುತ್ತಲಿನ ಜಾಗದಲ್ಲಿ ಇರುವ ಹಲಸಿನ ಕಾಯಿಯನ್ನು ಕೀಳಬೇಡಿ. ಈ ಹಲಸಿನ ಕಾಯಿ ಹಣ್ಣಾಗಿ ಕೊಳೆಯಬಹುದು , ನುಸಿ ಬರಬಹುದು, ಇದರಿಂದ ಅಪಾಯವೇನಿಲ್ಲ.
ನಾವು ಮನುಷ್ಯರು ನಮ್ಮ ಚಿಕ್ಕ ಹೊಟ್ಟೆ ಪಾಡಿಗೆ ಎಕರೆಗಟ್ಟಲೇ ಕೃಷಿ ಮಾಡುತ್ತೇವೆ.ನಿಸರ್ಗದ ಮೇಲೆ ಹಕ್ಕು ಸಾಧಿಸುತ್ತೇವೆ.. ಮಂಗ ಸೇರಿದಂತೆ ಇತರೆ ಕಾಡು ಜೀವಿಗಳಿ ಗೂ ಈ ನಿಸರ್ಗದ ಮೇಲೆ ನಮ್ಮಷ್ಟೇ ಹಕ್ಕು ಇದೆ. ಆದ್ದರಿಂದ ಬಂಧುಗಳೇ ದಯವಿಟ್ಟು ಕರುಣಾಳುಗಳಾಗಿ. ಹಲಸಿನ ಕಾಯಿ ಮಾರಾಟ ಮಾಡದಿರಿ. ಈ ಹಲಸಿನ ಕಾಯಿಯಿಂದ ದೇವ್ರಾಣೆ ನಿಮಗೆ ಯಾವುದೇ ತೊಂದರೆ ಇಲ್ಲ.
ಈ ನಿಸರ್ಗದ ಜೊತೆಯಲ್ಲಿ ಸಹಬಾಳ್ವೆ ಮಾಡೋಣ.
|
ಪ್ರತ್ಯುತ್ತರಫಾರ್ವರ್ಡ್ |






