ರಾಜ್ಯ ರೈತ ಕುಟುಂಬದ ಒಡನಾಡಿ “ಕೃಷಿ ಬಿಂಬ”ಪತ್ರಿಕೆ ಯ ಜನವರಿ ಸಂಚಿಕೆ ಇದೀಗ ಸಿದ್ದಗೊಂಡು ಚಂದಾದಾರ ಓದುಗರಿಗೆ ತಲುಪುತ್ತಿದೆ. ಈ ತಿಂಗಳ ಕೃಷಿಬಿಂಬದಲ್ಲಿ ಎಂದಿನಂತೆ ಕೃಷಿ ಖುಷಿಯ ಸ್ವಾದ ನೀಡುವ ಬರಹಗಳಿವೆ. ಚೇತೋಹಾರಿ ಮಾಹಿತಿಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಳನಾಡು ಮೀನು ಪಾಲನೆಯ ಅವಕಾಶಗಳನ್ನು ತಿಳಿಸುವ ಡಾ. ರವೀಂದ್ರಗೌಡ ಪಾಟೀಲ, ಡಾ. ಟಿ.ಜೆ. ರಮೇಶ, ಮಂಗಳೂರು ಅವರ ಬರಹ, ನೋವು, ಊತ ಮತ್ತು ಗಾಯಕ್ಕೆ ಅಡಿಕೆ ಮದ್ದು ಕುರಿತು ಡಾ.ಸರ್ಪಂಗಳ ಕೇಶವ ಭಟ್, ಮಂಗಳೂರು ಬರೆದ ಮಾಹಿತಿಪೂರ್ಣ ಬರಹ, ನೌಕಾ ಕನ್ಟೈನರಿನಲ್ಲಿ ಕೇಸರಿ ಕೃಷಿಯ ವಿಶೇಷತೆ ಕುರಿತು ಅಡ್ಡೂರು ಕೃಷ್ಣ ರಾವ್ ಬರೆದ ಬರಹ,
ಶ್ವೇತಾ ಹೇಳಿಕೊಟ್ಟ ತುರಿದ ಸೌತೆಕಾಯಿ ಬೆಂದಿ ಕುರಿತು ರಸ ಪಾಕ ವಿಶೇಷ, ಸೀತಾಫಲ ಹಾಗೂ ನೆಲ್ಲಿಯ ಉಪಯೋಗಗಳ ಕುರಿತು ಡಾ. ಶಶಿಕುಮಾರ್ ಎಸ್., ಬಾಗಲಕೋಟ, ಪ್ರೋಟ್ರೇ ವಿಧಾನದಿಂದ ಉತ್ತಮ ಗುಣಮಟ್ಟದ ತರಕಾರಿ ಸಸಿಗಳ ಉತ್ಪಾದನೆಯ ಕುರಿತು ಡಾ. ರಶ್ಮಿ ಆರ್. ಮತ್ತು ಡಾ. ಟಿ. ಜೆ. ರಮೇಶ, ಮಂಗಳೂರು ಬರಹ, ಪುಂಗನೂರು ತಳಿ ಹಸು ಮಲೆನಾಡು ಗಿಡ್ಡ ತಳಿಯ ಕುರಿತ ಬರಹ, ಕೃಷಿಯತ್ತ ವಾಲಿದ ಯುವ ಇಂಜಿನಿಯರ್ ಕುರಿತು ರಾಧಾಕೃಷ್ಣ ತೊಡಿಕಾನ ಅವರು ಬರೆದ ಯಶೋಗಾಥೆ, ಬಹುಪಯೋಗಿ ಲೋಳೆಸರ ಕುರಿತು ಪುಷ್ಪಾ ಎಸ್. ಗೋರೆ ಕಾಳಾದೆ ದುರ್ಗಾ ಬರೆದ ಬರಹ,
ಕೃಷಿ ಉತ್ಪನ್ನಗಳ ಭೌಗೋಳಿಕ ಸೂಚಿಯ ಕುರಿತು ಡಾ. ಶರತ್ಚಂದ್ರ ರಾನಡೆ, ಯೂರಿಯಾ ಗೋಲ್ಡ್ ಕುರಿತು ಶ್ರೀಮತಿ ಶೃತಿ ಹೆಚ್. ಆರ್., ಡಾ. ಆರ್. ಗಿರೀಶ್, ಡಾ. ಅಂಜಲಿ ಎಂ.ಸಿ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ, ಕೆರೆ ಅರಲು ತೆಗೆಯಲು ಸರಳ ಸಾಧನದ ಬಗ್ಗೆ ಗಣಪತಿ ಹಾಸ್ಪುರ, ಯಲ್ಲಾಪುರ (ಉ. ಕ.), ಕಾಂಪೋಸ್ಟ್ ಕುರಿತು ಶಾಂತಿಮೂಲೆ ,ಚತುರಂಗ ಬಲದ ಕುರಿತು ಹರಿದಾಸ ಬಿ.ಸಿ ರಾವ್ ಶಿವಪುರ ಹೆಬ್ರಿ, ರತಪಾಕದಲ್ಲಿ ಶ್ವೇತಾ ಅವರು ಹೇಳಿಕೊಟ್ಟ ವಿಶೇಷ ಪಾಕಗಳಿವೆ. ಇವಿಷ್ಟು ಅಲ್ಲದೇ ಮನಸೆಳೆದ ಕೃಷಿ ಮೇಳ, ಶೃಂಗೇರಿ ಭತ್ತದ ಗದ್ದೆಗಳು, ಉದ್ಯಮ ಕ್ಷೇತ್ರದಲ್ಲಿದ್ದರೂ ಬಿಡದ ಕೃಷಿ ನಂಟು ಹೊಸತನದ ಅಡಿಕೆ ಕೃಷಿ, ಚನ್ನೆಮಣೆಕಾಯಿ (ಮಂಜಟ್ಟಿ) ಕುರಿತ ಬರಹಗಳು ಜನವರಿ ತಿಂಗಳ ಕೃಷಿಬಿಂಬ ಮುದ್ರಣ ಸಂಚಿಕೆಯ ವಿಶೇಷ.
ಕೃಷಿಬಿಂಬ ಮುದ್ರಣ ಸಂಚಿಕೆಯ ಚಂದಾದಾರರಾಗಲು: