spot_img
Tuesday, September 17, 2024
spot_imgspot_img
spot_img
spot_img

ಅನ್ನದಾತನ ಆತ್ಮಹತ್ಯೆ  ಹೀಗೊಂದು ವಿಶ್ಲೇಷಣೆ !

-ಪ್ರಬಂಧ ಅಂಬುತೀರ್ಥ

ಮೊನ್ನೆ ಪ್ರಮುಖ ದಿನ ಪತ್ರಿಕೆಯಲ್ಲಿ ರಾಜ್ಯದಲ್ಲಿ ಇತ್ತಿಚೆಗೆ ಸಾವಿದಾರುನೂರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಅತ್ಯಂತ ಆಘಾತಕಾರಿ ಸಂಗತಿಯನ್ನು ಪ್ರಮುಖ ಸುದ್ದಿ ಮಾಡಿದ್ದರು. ಸಾವು ಹೇಗೆ ಭೂಮಿಯ ಮೇಲೆ ಹುಟ್ಟಿದ ಎಲ್ಲಾ ಜೀವಿಗಳಿಗೂ ಬರುತ್ತದೋ ಹಾಗೆ ಆತ್ಮಹತ್ಯೆ ಕೂಡ ಬಡವ ಬಲ್ಲಿದ ಎನ್ನದೇ ಎಲ್ಲರ ವರ್ಗದ ಜನರನ್ನು ಕಾಡುತ್ತದೆ. ಬಹುಶಃ ಬಹುತೇಕ ಎಲ್ಲ ಜನರನ್ನು ಜೀವ ಮಾನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಈ ಜೀವನ ಬೇಡ, ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗಿ ಬಿಡೋಣ ” ಅಂತನ್ನಿಸಿರುತ್ತದೆ…!!

ಆದರೆ ಜಗತ್ತಿನ ಎಲ್ಲಾ ಜೀವಿಗೆ ಏನೇ ಕಷ್ಟ ನಷ್ಟ ಇರಲಿ, ತಮ್ಮವರು ಯಾರು ಇಲ್ಲದಿರಲಿ, ಬಡತನ ಇರಲಿ,  ಅಂಗವೈಕಲ್ಯ ಇರಲಿ ಏನೇ ಇರಲಿ ಇದೆಲ್ಲಕ್ಕಿಂತ ತನ್ನ ಉಸಿರನ್ನು ಪ್ರೀತಿಸುವ ಮನಸ್ಥಿತಿ ಇರುತ್ತದೆ.

ಆತ್ಮಹತ್ಯೆ ಖಂಡಿತವಾಗಿಯೂ ಸುಲಭವಾದ ವಿಚಾರವೂ ಅಲ್ಲ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವವರು “ಹೇಡಿ” ಗಳೂ ಅಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ನಿಂತವನಿಗೆ ಸಾವನ್ನು ಎದುರು ನೋಡುವ ಧೈರ್ಯ ಇರುತ್ತದೆ. ಆ ನಿರ್ಯಾತ ಅಂಧಕಾರದತ್ತ ಸಾಗಲು ಭಯಂಕರ ಧೈರ್ಯ ಬೇಕು. ಮನುಷ್ಯ ಸಾವಿಗಿಂತ ಹೆಂಗೋ ಏನೋ ಇರೋದು, ತಿಂದುಂಡು ಬಾಳುವ ಯೋಚನೆ ಗಟ್ಟಿ ಮಾಡೋದು ಇದಕ್ಕೆ. ಸಾವು ಬಹಳ ಕಷ್ಟಾತಿಕಷ್ಟದ ವಿಚಾರ. ಕುತ್ತಿಗೆಗೆ ನೇಣು ಬಿಗಿದು ಅಕಸ್ಮಾತ್ತಾಗಿ ಬದುಕಿದವರು ಹೇಳುವ ಅನುಭವ ಕೇಳಿದರೆ ಸಾವು ಎಷ್ಟು ಘೋರ ಎಂಬ ಭಯ ಆವರಿಸುತ್ತದೆ.

ಆ ಕ್ಷಣದಲ್ಲಿ ನರ ನಾಡಿಗಳೆಲ್ಲ ಒಮ್ಮೆಗೆ ಕಿತ್ತು ಹಾಕುವ ನೋವು ಯಮ ಯಾತನೆ. ಹೀಗೆ ಎಲ್ಲಾ ಬಗೆಯ ಆತ್ಮಹತ್ಯಾ ಪ್ರಯತ್ನದಲ್ಲೂ ಮನುಷ್ಯನ ದೇಹದಿಂದ ಉಚ್ವಾಸ ನಿಚ್ವಾಸ ನಿಲ್ಲುವ ಅಂತಿಮ ಕ್ಷಣ ಅತ್ಯಂತ ಯಾತನಾದಾಯಕ.  ಯಾರು ಸಾಯಲು ಹೊರಟಿದ್ದಾರೋ ಅವರಿಗೆ ಚಾಲ್ತಿ ಬದುಕಿಗಿಂತ ಆತ್ಮಹತ್ಯೆ ಮಾಡಿಕೊಂಡು ಸಾಯುವುದು ದುಪ್ಪಟ್ಟು ಸವಾಲಿನ ವಿಚಾರ . ಅದಕ್ಕೆ ಆತ್ಮಹತ್ಯೆ ಆಲೋಚನೆ ಬಂದವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳೊಲ್ಲ.  ಆದರೆ ಈ ಕ್ರೂರ ಆತ್ಮಹತ್ಯೆಯ ಬಗ್ಗೆ ಮನಸು ಮಾಡುವಷ್ಡು ಬದುಕು ಕ್ರೂರ ಆಗುವಾಗ ಆ ಸಾವಿಗೆ ಪ್ರಚಲಿತ ಸಮಾಜವೂ ಹೊಣೆಯಾಗುತ್ತದೆ ಎಂಬುದೂ ಅತ್ಯಂತ ವಿಷಾಧನೀಯ ವಿಚಾರ .

ಆತ್ಮಹತ್ಯೆಯಲ್ಲಿ ಹಲವಾರು ಬಗೆಗಳಿವೆ.

ಮನುಷ್ಯ ಕೆಲವು ಆಘಾತಕಾರಿ ಘಟನೆ ನಡೆದಾಗ ತಕ್ಷಣ ಆತ್ಮಹತ್ಯೆಗೆ ಶರಣಾಗುತ್ತಾನೆ. ಉದಾಹರಣೆಗೆ ಪರೀಕ್ಷೆಲಿ ಫೇಲು, ಪ್ರೇಮ ವೈಫಲ್ಯ, ಪ್ರೀತಿ ಪಾತ್ರರ ಸಾವು, ತಕ್ಷಣದ ಸಾವಿಗೆ ಮನಮೂಡಿಸುತ್ತದೆ.  ವ್ಯವಹಾರದ ನಷ್ಟ, ಸಾಲಬಾಧೆ ಅತೀ ಹೆಚ್ಚು ಆತ್ಮಹತ್ಯೆಗೆ ದೂಡುವ ಪ್ರಮುಖ ಕಾರಣವಾಗಿದೆ.   ಮಾರಣಾಂತಿಕ ಖಾಯಿಲೆಗಳ ಯಾತನೆಯಿಂದ ಪಾರಾಗಲು ಅನೇಕ ರೋಗಿಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಾರೆ

ತತ್‌ಕ್ಷಣದ  ಆತ್ಮಹತ್ಯೆ ನಿರ್ಧಾರಗಳನ್ನು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳು ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೇನೆ ಎಂದು ಯಾರಲ್ಲೂ ಹೇಳಿಕೊಂಡಿರುವುದಿಲ್ಲ.ಆದರೆ ಮಿಕ್ಕುಳಿದ ಎಲ್ಲಾ ಆತ್ಮಹತ್ಯೆಗಳು ಆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳು ತಮ್ಮ ಸಹಚರ ಆತ್ಮೀಯ ಸಂಬಂಧಿಗಳ ಜೊತೆಯಲ್ಲಿ ತಮಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೆನ್ನಿಸುತ್ತಿದೆ ಎಂದು ಹೇಳಿಕೊಂಡಿರುತ್ತಾರೆ ಎಂಬುದು ಗಮನಾರ್ಹ ಸಂಗತಿ.

ಬಹುತೇಕ ಸಂಧರ್ಭದಲ್ಲಿ ಈ ಹತಾಶ ವ್ಯಕ್ತಿಯ ಸಂಬಂಧಿ, ಬಂಧು ಮಿತ್ರರು ತಾವೇ ಬುದ್ಧಿ ಹೇಳಿ ಸಮಾಧಾನ ಮಾಡಿ ಕಳಿಸಿರುತ್ತಾರೆ. ಆದರೆ ಇದೇ ಸಮಾಜ ಹತಾಶ ಜೀವಿಗಳ ವಿಚಾರದಲ್ಲಿ ಮಾಡುವ ಬಹುದೊಡ್ಡ ತಪ್ಪು. ಆತ್ಮಹತ್ಯೆ ನಿರ್ಧಾರ ಎಂಬುದು ವ್ಯಕ್ತಿ ಯೊಬ್ಬನ ಖಿನ್ನತೆಯ ದುಷ್ಪರಿಣಾಮ. ಇದಕ್ಕೆ ನಮ್ಮ ನಿಮ್ಮಂಥ ಸಾಮಾನ್ಯ ಜನರ ಸಮಾಧಾನ , ಜೀವನ ಪ್ರೀತಿ ಮೂಡುವ ಮಾತುಗಳ ಜೊತೆಗೆ ಸಂಬAಧಿಸಿದ ವೈದ್ಯರ ಚಿಕಿತ್ಸೆ ಅತ್ಯಗತ್ಯ.

ನನ್ನ ಬಂಧುವೊಬ್ಬರ ಆತ್ಮಹತ್ಯೆ ವಿಚಾರದಲ್ಲಿ ವಿಚಾರಣೆ ಮಾಡಿದಾಗ ಕಂಡು ಬಂದದ್ದೇನೆಂದರೆ ಆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ತನ್ನ ಹೆಂಡತಿಯನ್ನೂ ಸೇರಿದಂತೆ ಹಲವಾರು ಜನ ಬಂಧುಗಳ ಬಳಿ ತನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನಿಸುತ್ತಿದೆ ” ಎಂದು ಹೇಳಿಕೊಂಡಿದ್ದರAತೆ. ಎಲ್ಲರೂ ಸಮಾಧಾನದ ಮಾತನಾಡಿದ್ದಾರೆ. ಹೇಗೆ ತಲೆನೋವೋ , ಜ್ವರವೋ , ಶೀತಕ್ಕೋ ಸಮಾಧಾನದ ಮಾತು ಪಥ್ಯವಾಗಿ ವಾಸಿ ಯಾಗುವುದಿಲ್ಲವೋ ಹಾಗೆಯೇ ಆತ್ಮಹತ್ಯೆ ಎನ್ನುವ ಖಿನ್ನತೆ ಅಥವಾ ಮನೋಬಾಧೆಗೂ ವೈದ್ಯರ ಕೌನ್ಸಲಿಂಗ್ ಮತ್ತು ಔಷಧ ಮಾತ್ರೆ ಚಿಕಿತ್ಸ ಇಲ್ಲದೇ ನಿವಾರಣೆ ಆಗುವುದಿಲ್ಲ. ಮತ್ತು ಆ ವ್ಯಕ್ತಿಯ ಮನಸ್ಸಿನಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಮನೋಭಾವ ಹೋಗೋಲ್ಲ

ನಿಮ್ಮ ಬಳಿ ಯಾರಾದರೂ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೇಳಿದರೆ ಆತನ ಮಾತು ಎಷ್ಟು ಗಂಭೀರವಾಗಿದೆ ಎಂದು ಗಮನಿಸಿ ನಂತರ ಅವರ ಹತ್ತಿರದ ಸಂಬಂಧಿಗಳ ಗಮನಕ್ಕೆ ಈ ವಿಚಾರವನ್ನು ಮನದಟ್ಟು ಮಾಡಿ ಆತನನ್ನು ಕೂಡಲೇ ಸಂಬಂಧಿಸಿದ ವೈದ್ಯರ ಬಳಿ ಕರೆದುಕೊಂಡು ಹೋಗುವಂತೆ ಮಾರ್ಗದರ್ಶನ ಮಾಡಲೇಬೇಕು.

ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ತಕ್ಷಣದ ಕಾರಣಕ್ಕೆ ತಕ್ಷಣಕ್ಕೆ ಆತ್ಮಹತ್ಯೆ ಮಾಡು ಕೊಳ್ಳುವವರ ಹೊರತುಪಡಿಸಿ ಬೇರೆಲ್ಲಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು ಒಬ್ಬರಲ್ಲ ಒಬ್ಬರಿಗೆ ತಮ್ಮ ಆತ್ಮಹತ್ಯಾ ನಿಲುವಿನ ಬಗ್ಗೆ ಹೇಳಿಕೊಂಡಿರುತ್ತಾರೆ. ನೀವು ಯಾವುದೇ ಆತ್ಮಹತ್ಯಾ ಪ್ರಕರಣದ ನಂತರ ಅವರ ಕುಟುಂಬ ವರ್ಗದವರನ್ನು ಸಂಪರ್ಕ ಮಾಡಿದಾಗ ಅವರು ಈ ವಿಚಾರವನ್ನು ಹೇಳುತ್ತಾರೆ. ಆದರೆ ಎಲ್ಲಾ ಸರ್ತಿಯೂ ಹೀಗೆ ಹೇಳಿಕೊಂಡ ದುರ್ದೈವಿಗಳ ಮಾತಿಗೆ ಒಂದಷ್ಟು ಸಮಾಧಾನದ ಮಾತಿನ ಹೊರತಾಗಿ ಬೇರಾವ ಬೆಳವಣಿಗೆಯೂ ಆಗಿರದ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಆತ್ಮಹತ್ಯಾ ತೀವ್ರತೆಗೆ ಮೆದುಳಿನಲ್ಲಿ ಆಗುವ ಬೆಳವಣಿಗೆ, ರಕ್ತ ಪರಿಚಲನೆಯ ವ್ಯತ್ಯಾಸ , ಹಾರ್ಮೋನು ವ್ಯತ್ಯಾಸ ಮುಂತಾದ ಕಾರಣವಾಗುತ್ತದೆ. ಇದಕ್ಕೆ ವೈದ್ಯಕೀಯ ಚಿಕಿತ್ಸೆ ಅತಿ ಮುಖ್ಯ.  ನಾವು ದೊಡ್ಡ ಮಹಾನ್ ಜ್ಞಾನಿಗಳಂತೆ ಬುದ್ಧಿವಾದ ಹೇಳಿ ಕನ್ವಿನ್ಸ್ ಮಾಡಲು ಹೋದರೆ ನಮ್ಮ ಮಾತುಗಳು ಅವರಿಗೆ ತಾತ್ಕಾಲಿಕ ಪರಿಣಾಮ ಮಾತ್ರ ಬೀರಬಲ್ಲದು. ಆದರೆ ವೈದ್ಯರ ಮಾತ್ರೆ ಔಷಧಿಗಳು  ಈ ದುರ್ದೈವಿಗಳ ಬಚಾವು ಮಾಡಬಲ್ಲದು ಎಂಬ ಅರಿವು ನಮಗಿರಬೇಕು.

ತೀವ್ರವಾಗಿ ಆತ್ಮಹತ್ಯೆ ಮಾಡಿಕೊಳ್ಳಲೇಬೇಕು ಎನಿಸುವುದು ಮಾನಸಿಕ ಅಸ್ವಸ್ಥತೆ. ಇದು ಬಿಪಿ, ಷುಗರ್ , ಕ್ಯಾನ್ಸರ್ ಇತರೆ ಖಾಯಿಲೆಗಳಂತೆ ಖಾಯಿಲೆಯೇ. ನಮ್ಮ ದೇಶದಲ್ಲಿ ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದ ರೋಗದ ಬಗ್ಗೆ ಅರಿವು ಜಾಗೃತಿ ತುಂಬಾ ಕಡಿಮೆ. ಆದರೆ ಭಾರತದ ದೇಶ ಮಟ್ಟದಲ್ಲಿ ಚಿಂತನೆ ಮಾಡಿದರೆ ಆತ್ಮಹತ್ಯಾ ಪ್ರಕರಣದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರು ರೈತರು…!!

“ಜಮೀನ್ದಾರ”  ರೈತ ತನ್ನ ಬೆವರು ಹರಿಸಿ ಅನ್ನ ಹುಟ್ಟಿಸುವ ಶ್ರಮದ ದುಡಿಮೆಯ ಪ್ರಯತ್ನದ ಯಾವುದೋ ಹಂತದ ಸೋಲಿನ ಅಪಘಾತವಾದಾಗ ಆ  ರೈತನ ಭವಿಷ್ಯಕ್ಕೆ “ಜಾಮೀನ್ದಾರರು ” ಯಾರೂ ಇಲ್ಲ. ಎಂಬದು ಅತಿ ದೊಡ್ಡ ವಿಪರ್ಯಾಸ…!! ಸಾಲ ಮಾಡಿಕೊಂಡು ಕೃಷಿ ಮಾಡಿದ ರೈತನಿಗೆ ಬೀಜದಿಂದ ಮಾರುಕಟ್ಟೆಯಲ್ಲಿ ಮಾರಾಟವಾಗಿ ಉತ್ತಮ ಬೆಲೆ ಸಿಗುವ ತನಕವೂ ಕೃಷಿ ಬದುಕು ಅಭದ್ರತೆ. ವರ್ತಮಾನದ ಸಾಲ ಭವಿಷ್ಯದ ಆತಂಕ ಹತಾಶ ರೈತನನ್ನ ಆತ್ಮಹತ್ಯೆಗೆ ದೂಡುತ್ತಿದೆ. ಸರ್ಕಾರಗಳು ರೈತರ ಆತ್ಮಹತ್ಯೆಯನ್ನ ಲೆಕ್ಕ ಹಾಕುತ್ತಿಧೆ ಹೊರತು ರೈತ ಆತ್ಮಹತ್ಯೆ ” ಮಾಡಿಕೊಳ್ಳದಂತೆ”  ಹೇಗೆ ತಡೆಯಬಹುದು ಎಂಬ ಬಗ್ಗೆ ಚಿಂತನೆ ನಡೆಸುತ್ತಿಲ್ಲ…!!!

ನಮ್ಮ ಮಲೆನಾಡು ಕರಾವಳಿಯಲ್ಲೀಗ ಅಡಿಕೆ ಬೆಳೆಗಾರ ಕೃಷಿಕನ ಬದುಕು ಎಲೆಚುಕ್ಕಿ ರೋಗ, ಹಳದಿ ಎಲೆ ರೋಗದಿಂದ ಆತಂಕವನ್ನು ಮೂಡಿಸುತ್ತಿದೆ. ಅಡಿಕೆ ಈ ರೋಗಗಳೋ , ಹವಾಮಾನ ವೈಪರೀತ್ಯಗಳಿಂದಲೋ, ಕಾಡು ಪ್ರಾಣಿಗಳ ಹಾವಳಿಯೋ ಕೊನೆಗೆ ಅಡಿಕೆ ಬೆಳೆ ವಿಸ್ತರಣೆಯ ಕಾರಣಕ್ಕೋ ಒಂದಲ್ಲ ಒಂದು ದಿನ ಬೆಳೆಗಾರರಿಗೆ ಕೈ ಕೊಡುವುದು ನಿಚ್ಚಳ.

ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಅಡಿಕೆ ಬೆಳೆಗೆ “ಪರ್ಯಾಯ” ಹುಡುಕಿಕೊಳ್ಳದಿದ್ದರೆ ಖಂಡಿತವಾಗಿಯೂ ಅಡಿಕೆ ಬೆಳೆಗಾರರ ಬದುಕು ನಷ್ಟಕ್ಕೆ ಈಡಾಗಿ ರೈತ ದಿಕ್ಕು ತೋಚದಂತಾಗುತ್ತದೆ. ಈಗಾಗಲೇ ಆತ್ಮಹತ್ಯಾ ಪ್ರಕರಣಗಳು ಮಲೆನಾಡು, ಕರಾವಳಿಯ ಭಾಗದಲ್ಲಿ ಅಲ್ಲಲ್ಲಿ ವರದಿ ಯಾಗಿದೆ. ಈ ಅಡಿಕೆ ಸಮಸ್ಯೆಗೆ “ಪರ್ಯಾಯವೇ ಮದ್ದು”…

ನಮ್ಮ ಸುತ್ತಮುತ್ತಲಿನ ಅಡಿಕೆ ಬೆಳೆಗಾರರಾದರೂ ಈ ತರಹದ ನಷ್ಟಕ್ಕೆ ಆತ್ಮಹತ್ಯೆ ಯ ಬಗ್ಗೆ ಮಾತನಾಡಿದರೆ ಅವರಿಗೆ ಸಕಾರಾತ್ಮಕ ಮಾತನಾಡಿ ಅವರನ್ನು ವೈದ್ಯಕೀಯ ಚಿಕಿತ್ಸೆ ಪಡೆಯಲು ಪ್ರೇರಣೆ ಮಾಡಬೇಕಾಗಿದೆ. ಯಾರಾದರೂ ಆತ್ಮಹತ್ಯಾ ಆಲೋಚನೆಯಲ್ಲಿದ್ದು ಆ ಬಗ್ಗೆ ಮಾತನಾಡಿದರೆ ಬರೀ ಸಮಾಧಾನದ ಮಾತನಾಡದೇ ಅವರ ಕುಟುಂಬ ವರ್ಗದವರ ಬಳಿ ಅವರ ನಕಾರಾತ್ಮಕ ಮನಸ್ಥಿತಿಯ ಬಗ್ಗೆ ಗಮನಕ್ಕೆ ತಂದು ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಮಾರ್ಗದರ್ಶನ ಮಾಡದಿದ್ದಲ್ಲಿ ಆ ಹತಾಶ ಜೀವಿಯು ಮುಂದೆ ಆತ್ಮಹತ್ಯೆ ಮಾಡಿಕೊಂಡಲ್ಲಿ ಆ ದುರ್ಮರಣದಲ್ಲಿ ನಮ್ಮ ಪಾಲು ಸೇರುತ್ತವೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group